ಕರ್ನಾಟಕ ಕುರುಕ್ಷೇತ್ರ: ಯಾರು ಗೆಲ್ತಾರೆ? ವಕೀಲ್ ಸಾಬಾ..? ಸಿಂಗ್ ಸಾಬಾ?

May 3, 2023, 11:32 PM IST

ಕಾಂಗ್ರೆಸ್ ರಣದೀಪ್ ಸಿಂಗ್ ಸುಜೇರ್ವಾಲ, ಬಿಜೆಪಿ ಅರುಣ್ ಸಿಂಗ್.  ಇಬ್ಬರು ಉಸ್ತುವಾರಿಗಳೂ ಚುನಾವಣಾ ತಂತ್ರಗಾರರು ಅನ್ನೋದು ಬಹಳ ಮುಖ್ಯ. ಮೇ 13 ರಂದು ಯಾರು ಗೆದ್ರೂ ಇಬ್ಬರು ಉತ್ತರ ಭಾರತದವವರ ಕಿರೀಟಕ್ಕೆ ಒಂದು ಗರಿ‌ ಸಿಗಲಿದೆ. ಈಶ್ವರಪ್ಪ v/s ಬಿಎಸ್ ವೈ, ಕೇಂದ್ರ ಮಾಜಿ ಸಚಿವ ಯತ್ನಾಳ್ v/s ಬಿಎಸ್ ವೈ ಇಂಥ ಹತ್ತಾರು ಅಸಮಧಾನಗಳಿಗೆ ಅರುಣ್ ಸಿಂಗ್ ಉತ್ತರ ಹುಡುಕಿದ್ದಾರೆ. ಇತ್ತ ಡಿಕೆಶಿ v/s ಸಿದ್ದರಾಮಯ್ಯ ಸಿಎಂ ಗಲಾಟೆಯಿಂದ ಹಿಡಿದು ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್ ಹಾಗು ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿ ಫಾಮ್೯ ಕೊಡುವ ತನಕ ಆ ತಂತ್ರಗಾರಿಕೆಯ ಹಿಂದೆ ನಿಂತಿದ್ದು ಸುಜೇರ್ವಾಲ. ಗುಲಾಮ್ ನಬಿ ಆಜಾದ್, ಮಧುಸೂದನ್ ಮಿಸ್ತ್ರಿ ನಂತರ ಸುಜೇರ್ವಾಲ ಅಚ್ಚುಕಟ್ಟಾಗಿ ತಂತ್ರಗಾರರನ ಪಾತ್ರ ನಿಬಾಯಿಸಿದ್ರು ಎನ್ನುತ್ತೆ ಎಐಸಿಸಿ ಕಟ್ಟೆ. ಇನ್ನು ಕೇಂದ್ರ ಘಟಕ ಹೇಳಿದ ಪ್ರತಿ ಸಂಗತಿಯನ್ನೂ ಕನ್ನಡನಾಡಿನ ಕೇಸರಿ ಪಡೆಗೆ  ಅಚ್ಚುಕಟ್ಟಾಗಿ ತಲುಪಿಸಿದ್ದ ಸಿಂಗ್ ಸಾಬ್... ಮೇ 13 ರಂದು ಯಾರು ಗೆಲ್ತಾರೆ ವಕೀಲ್ ಸಾಬಾ..? ಸಿಂಗ್ ಸಾಬಾ?...