ಕರಾವಳಿ ಟಿಕೆಟ್‌ ಹಂಚಿಕೆಯಲ್ಲಿ ಕೈ ಹೊಸ ಪ್ರಯೋಗ: ಪುತ್ತೂರಿನಲ್ಲಿ RSS ಹಿನ್ನೆಲೆಯ ,ಅಶೋಕ್‌ ರೈಗೆ ಟಿಕೆಟ್‌

Apr 17, 2023, 10:02 AM IST

 ಕಾಂಗ್ರೆಸ್‌ 3 ನೇ ಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.ಕರಾವಳಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯಲ್ಲಿ ಕೈ ಹೊಸ ಪ್ರಯೋಗ ಮಾಡಿದ್ದು,  ಸಂಘ ಪರಿವಾರ ಮೂಲದ ವ್ಯಕ್ತಿಗೆ ಟಿಕೆಟ್‌ ಕೊಟ್ಟಿದೆ.  ಕರಾವಳಿಯ ಹೈ ವೋಲ್ಟೇಜ್‌ ಕ್ಷೇತ್ರಗಳಾದ ಪುತ್ತೂರು, ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಹೆಸರು ಘೊಷಣೆಯಾಗಿದೆ. ಮಂಗಳೂರು ಉತ್ತರಕ್ಕೆ ಇನ್ನೂ ಟಿಕೆಟ್‌ ಘೋಷಣೆ ಮಾಡಿಲ್ಲ. ಪುತ್ತೂರು ಕ್ಷೇತ್ರದಿಂದ ಶಕುಂತಳಾ ಶೆಟ್ಟಿ ಹಾಗೂ  ಅಶೋಕ್‌ ರೈಗೆ ಮಧ್ಯೆ ತೀವ್ರ ಪೈಪೋಟಿ ಇದ್ದಿದ್ದು, ಇದೀಗ RSS ಹಿನ್ನೆಲೆಯ ಅಶೋಕ್‌ ರೈಗೆ ಟಿಕೆಟ್‌ ಪಾಲಾಗಿದೆ.