Oct 19, 2019, 2:13 PM IST
ಬೆಂಗಳೂರು (ಅ.19): ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಬಳಿಕ ಕಾಂಗ್ರೆಸ್ ನಾಯಕ, ಮಾಜಿ ಉಪ-ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನಡೆಸಿದ್ದಾರೆನ್ನಲಾದ ಮತ್ತಷ್ಟು ಗೋಲ್ಮಾಲ್ ಪ್ರಕರಣಗಳು ಹೊರಬಿದ್ದಿವೆ.
ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆ ದಾಳಿ ಬಳಿಕ ಪ್ರಕರಣವನ್ನು ಬೆನ್ನತ್ತಿರುವ ಸುವರ್ಣನ್ಯೂಸ್ ತಂಡಕ್ಕೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಕೋಟಿ ಕೋಟಿ ಅಕ್ರಮ ಹಣ ಸಾಗಾಟ ಬಲೆಯಲ್ಲಿದ್ದಾರೆ ಮಾಜಿ ಡಿಸಿಎಂ.
ಕಳೆದ ವಾರ ಐಟಿ ಅಧಿಕಾರಿಗಳು ಪರಮೇಶ್ವರ್ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ, ಅವರ ಆಪ್ತ ಸಹಾಯಕ ರಮೇಶ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು.