ಸಂಪುಟ ಸೇರಲು ಬಿಸಿ ಪಾಟೀಲ್, ಶ್ರೀರಾಮುಲು ಸರ್ಕಸ್, ದೇವರ ಮೊರೆ ಹೋದ ನಾಯಕರು

Aug 3, 2021, 2:05 PM IST

ಬೆಂಗಳೂರು (ಆ. 03): ಕ್ಯಾಬಿನೆಟ್ ಸೇರಲು ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ದೇವರ ಮೊರೆ ಹೋಗಿದ್ದಾರೆ. ಹಿರೇಕೆರೂರು ಪಟ್ಟಣದ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಪುಟ ಸೇರಲು ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಶ್ರೀರಾಮುಲು ಕೂಡಾ ದೇವರ ಮೊರೆ ಹೋಗಿದ್ದಾರೆ. ಅಭಿಮಾನಿಗಳು ಕೂಡಾ ವಿಶೇಷ ಹರಕೆ ಸಲ್ಲಿಸಿದ್ದಾರೆ.

ಸಿಎಂ ಮಾಡಲಿಲ್ಲ, ಮಂತ್ರಿಗಿರಿಯಾದರೂ ಕೊಡ್ರಿ, ವರಿಷ್ಠರ ಮುಂದೆ ಬೆಲ್ಲದ್ ಅಳಲು..!