'ಲಕ್ಷ್ಮಣ' ಗೆರೆ ಎಳೆದ ಸವದಿ: ಡಿಸಿಎಂ ಸಾಹೇಬ್ರ ಬೈ ಎಲೆಕ್ಷನ್ ನಡೆ ಇನ್ನೂ ಕುತೂಹಲ

Nov 22, 2019, 3:51 PM IST

ಬೆಳಗಾವಿ,(ನ.22): ಅಥಣಿ ಉಪಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿಸಿಎಂ ಲಕ್ಷ್ಮಣ್ ಸವದಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಧಾನಗೊಂಡಿದ್ದು ಅವರ ಮನವೋಲಿಕೆಯೂ ಸಹ ಯಶಸ್ವಿಯಾಗಿದೆ.

ಡಿಸಿಎಂ ಒತ್ತಾಯಕ್ಕೆ ಮಣಿದು JDS ನಾಮಪತ್ರ ವಾಪಾಸು; ಬಿಜೆಪಿ ರಿಲ್ಯಾಕ್ಸು!

ಅಷ್ಟೇ ಅಲ್ಲದೇ ಅಥಣಿಯಿಂದ ಮಹೇಶ್ ಕುಮಟಳ್ಳಿ ಗೆಲ್ಲಿಸುವ ಜವಾಬ್ದಾರಿ ಲಕ್ಷ್ಮಣ್ ಸವದಿಗೆ ವಹಿಸಲಾಗಿದೆ. ಆದ್ರೆ, ಸವದಿ ಮಾತ್ರ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಗೆಲ್ಲಿಸುವುದೇ ನನ್ನ ಗುರಿ ಎಂದಿದ್ದಾರೆ. 

ಆದ್ರೆ, ತಮ್ಮಗೆ ವಹಿಸಿರುವ ಅಥಣಿ ಕ್ಷೇತ್ರದಲ್ಲಿ ಕುಮಟಳ್ಳಿ ಗೆಲುವಿನ ಅಂತರ ಹೇಳಲು ಆಗಲ್ಲ ಎಂದು ಎಚ್ಚರಿಕೆ ಹೇಳಿಕೆ ನೀಡಿದ್ದಾರೆ. ಸವದಿ ಈ ಹೇಳಿಕೆ ನೋಡಿದ್ರೆ ಹಲವು ಅನುಮಾನಗಳಿಗ ಎಡೆಮಾಡಿಕೊಟ್ಟಿದೆ. ಹಾಗಾದ್ರೆ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.