ರಾಷ್ಟ್ರೀಯ ವಾದಿಗಳನ್ನು ಗುರಿ ಮಾಡಿ ಹತ್ಯೆ ಮಾಡಲಾಗುತ್ತಿದೆ : ಸಿ.ಟಿ. ರವಿ ಪ್ರಶ್ನೆ

Jul 12, 2023, 12:42 PM IST

ಬೆಂಗಳೂರು: ಈ ಸರ್ಕಾರ ಬಂದ ಮೇಲೆ ಟಾರ್ಕೆಟ್‌ ಕಿಲ್ಲಿಂಗ್‌ ಆರಂಭವಾಗಿದೆ. ಹಿಂದುತ್ವದ ಜೊತೆ ಗುರುತಿಸಿಕೊಂಡವರೇ ಕೊಲೆ ಆಗ್ತಿರೋದೇಕೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ(C T Ravi) ಪ್ರಶ್ನಿಸಿದ್ದಾರೆ. ಇದರ ಜೊತೆಗೆ ಬೆಂಗಳೂರಿನ ಡಬಲ್ ಮರ್ಡರ್‌(bengaluru double murder) ಪ್ರಕರಣ ಸಹ ರಾಜಕೀಯ ತಿರುವು ಪಡೆದುಕೊಂಡಿದೆ. ನವ ಉದ್ಯಮಿ ಫಣೀಂದ್ರ, ವಿನುಕುಮಾರ್‌ರನ್ನು ಟಾರ್ಗೆಟ್‌ ಮಾಡಿ ಕೊಲೆ(Murder) ಮಾಡಲಾಗಿದೆ. ನವ ಉದ್ಯಮಿಯಾಗಿ ರಾಷ್ಟ್ರೀಯ ವಿಚಾರದ ಜೊತೆ ಫಣೀಂದ್ರ ಗುರುತಿಸಿಕೊಂಡಿದ್ದರು ಎಂದು ಸಿ.ಟಿ. ರವಿ ಹೇಳಿದ್ದಾರೆ. ಅಲ್ಲದೇ ಈ ಹತ್ಯೆಯನ್ನು ಸಿಟಿ ರವಿ ಖಂಡಿಸಿದ್ದಾರೆ. ರಾಷ್ಟ್ರೀಯ ವಾದಿಗಳನ್ನು ಗುರಿ ಮಾಡುತ್ತಿರುವ ಹಿಂದೆ ಪಿತೂರಿ ಇರಬಹುದು ಎಂದು ಸಿಟಿ ರವಿ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ಸರ್ಕಾರ ಬದುಕಿದೆಯಾ ಸತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ರಾಯಚೂರಿನಲ್ಲಿ ಟೊಮ್ಯಾಟೋಗಾಗಿ ಚಾಕು ಇರಿತ: ಸಿಸಿಟಿವಿಯಲ್ಲಿ ದೃಶ್ಯ ಸೆರೆ