JanaMata: ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಮತದಾರನ ನಾಡಿಮಿಡಿತ ಆನ್‌ಲೈನ್‌ ಸರ್ವೇಯಲ್ಲಿ ಜನ ಹೇಳಿದ್ದೇನು?

Apr 21, 2023, 9:37 PM IST

ಬೆಂಗಳೂರು(ಏ.21):  ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಡಿಜಿಟಲ್‌ ತಂಡ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ಜನರು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ನಾವು ಕೇಳಿದಂತ ಪ್ರಶ್ನೆಗಳಿಗೆ ಮತದಾರ ಪ್ರಭು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾರೆ. ಹಾಗಾದರೆ ರಾಜ್ಯದ ಮತದಾರ ಯಾವ ಪಕ್ಷದ ಪರ ಇದಾನೆ? ಎಂಬುದರ ಬಗ್ಗೆ ತಿಳಿಸಿಲಾಗಿದೆ. ನಾವು ನಡೆಸಿದ ಮಹಾ ಸಮೀಕ್ಷೆ ಸುಮಾರು 35 ಲಕ್ಷ ಜನರನ್ನ ತಲುಪಿದೆ. ಕರ್ನಾಟಕದಲ್ಲಿ ಮತ್ತೆ ಕಮಲ ಕಮಾಲ್‌ ಮಾಡುತ್ತಾ? ಎಂಬುದನ್ನ ಮೇ.13 ರವರೆಗೆ ಕಾಯಬೇಕಾಗಿದೆ. 

JanaMata: ಈ ಸಲ ಮತದಾರನ ಒಲವು ಯಾರ ಪರ, ಯಾರ ವಿರುದ್ಧ? ಆನ್‌ಲೈನ್‌ ಸರ್ವೇಯಲ್ಲಿ ಜನ ಹೇಳಿದ್ದೇನು?

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.