Daily Horoscope: ಇಂದು ಕೃಷ್ಣನಿಗೆ ತುಳಸಿ ಅರ್ಚನೆ ಮಾಡಿ, ಸ್ಮರಿಸಿ: ದೇವರ ಕೃಪೆಗೆ ಪಾತ್ರರಾಗಿ..

May 21, 2023, 9:42 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಭಾನುವಾರ, ದ್ವಿತೀಯ ತಿಥಿ, ರೋಹಿಣಿ ನಕ್ಷತ್ರ.

ರೋಹಿಣಿ ನಕ್ಷತ್ರವನ್ನು ಕೃಷ್ಣ ನಕ್ಷತ್ರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ದಿನ ಕೃಷ್ಣನ ದೇವಸ್ಥಾನಕ್ಕೆ ಹೋಗಿ, ತುಳಸಿ ಅರ್ಚನೆ ಮಾಡಿದ್ರೆ ಒಳ್ಳೆಯದು. ಕೃಷ್ಣ ಮನಸ್ಸಿನ ನಿರಾಳತೆಗೆ ಅಧಿಪತಿಯಾಗಿದ್ದಾನೆ. ಹಾಗಾಗಿ ಇಂದು ಕೃಷ್ಣನ ಪ್ರಾರ್ಥನೆ ಮಾಡಿ, ಜೊತೆಗೆ ಚಂದ್ರ ದರ್ಶನ ಸಹ ಮಾಡಿ. ಕೃಷ್ಣನಿಗಾಗಿ ಯಾವುದೇ ಕಠಿಣ ರತವನ್ನು ಮಾಡಬೇಡಿ. ಯಾಕಂದ್ರೆ ಇದು ಕೃಷ್ಣನಿಗೆ ಇಷ್ಟವಾಗುವುದಿಲ್ಲ. ಹೃದಯದಿಂದ ಯಾರು ಕೃಷ್ಣನನ್ನು ಇಷ್ಟ ಪಡುತ್ತಾರೋ ಅವರಲ್ಲಿ ಆತ ಇರುತ್ತಾನೆ. 

ಇದನ್ನೂ ವೀಕ್ಷಿಸಿ: ಬಡವರ ಪಾಲಿಗೆ ಅನ್ನದಾತ, ಕರುನಾಡ ಪಾಲಿಗೆ ಭಾಗ್ಯವಿದಾತ: ಸಿದ್ದರಾಮಯ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇ ರೋಚಕ..!