Panchanga: ಸೋಮವಾರ, ಈಶ್ವರನಿಗೆ ರುದ್ರಾಭಿಷೇಕ ಮಾಡಿಸುವುದರಿಂದ ಕಷ್ಟಗಳು ಕರಗುವುದು

Jun 20, 2022, 8:40 AM IST

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಶತಭಿಷ ನಕ್ಷತ್ರ, ಇಂದು ಸೋಮವಾರ. ಸಪ್ತಮಿ, ಶತಭಿಷ ನಕ್ಷತ್ರ ಬಂದಿರುವುದು ಶುಭ ಕಾರ್ಯಗಳಿಗೆ ಪ್ರಶಸ್ತವಾದ ಕಾಲ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸುವುದರಿಂದ ವಿಶೇಷ ಫಲವಿದೆ.