Panchanga: ಇಂದು ಭಕ್ತ ಸಿರಿಯಾಳ ಷಷ್ಠಿ, ಶಿವನಿಗೆ ಬಿಲ್ವಾರ್ಚನೆ ಮಾಡಿಸುವುದರಿಂದ ದಿವ್ಯ ಫಲ

Aug 3, 2022, 8:48 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲ ಪಕ್ಷ, ಷಷ್ಠಿ ತಿಥಿ, ಹಸ್ತ ನಕ್ಷತ್ರ, ಇಂದು ಬುಧವಾರ. ಶ್ರಾವಣ ಷಷ್ಠಿಯನ್ನು ಸಿರಿಯಾಳ ಷಷ್ಠಿ ಎಂದು ಕರೆಯಲಾಗುತ್ತದೆ. ಸಿರಿಯಾಳ ಶಿವನ ದೊಡ್ಡ ಭಕ್ತ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸಿರಿಯಾಳನ ವ್ರತ ಆಚರಣ ಮಾಡುವ ಪದ್ಧತಿ ಇದೆ. ಶಿವನ ಸನ್ನಿಧಾನದಲ್ಲಿ ಬಿಲ್ವಾರ್ಚನೆ, ರುದ್ರಾಭಿಷೇಕ ಮಾಡಿಸುವುದರಿಂದ ಶಿವನ ಅನುಗ್ರಹ ಆಗುವುದು.