ಪಂಚಾಂಗ: ಚಂದ್ರ ಬಲಕ್ಕಾಗಿ ದೀಪ ನಮಸ್ಕಾರ ಮಾಡಿ, ಅನುಕೂಲವಾಗುವುದು

Aug 2, 2021, 8:13 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಕೃತ್ತಿಕಾ ನಕ್ಷತ್ರ, ಇಂದು ಸೋಮವಾರ. ಶಂಕರನಿಗೆ ಪ್ರಿಯವಾದ ವಾರ. ಈಶ್ವರನ ಪ್ರಾರ್ಥನೆಯಿಂದ ಅನುಕೂಲವಾಗುವುದು. ಇನ್ನು ಜಾತಕದಲ್ಲಿ ಚಂದ್ರ ನಿರ್ಬಲನಾಗಿದ್ದರೆ ದೀಪ ನಮಸ್ಕಾರ ಮಾಡಿದರೆ ಚಂದ್ರನ ಶಾಂತಿಯಾಗಿ ಒಳ್ಳೆಯ ಫಲ ಪ್ರದವಾಗುತ್ತದೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ.