ನಿಮ್ಮ ಲೀಡರ್ ಸಿದ್ದುನಾ? BSYನಾ?: ಸುವರ್ಣ ನ್ಯೂಸ್ ಪ್ರಶ್ನೆ ಕೇಳಿ ಶಾಸಕ ಹೆಬ್ಬಾರ್ ತಬ್ಬಿಬ್ಬು!

Jul 25, 2019, 12:13 PM IST

ಬೆಂಗಳೂರು[ಜು.25]: ಮೂರು ವಾರಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಊರಿಗೆ ಮರಳಿದ್ದಾರೆ. ಹೀಗಿರುವಾಗ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ನಾವು ಅತೃಪ್ತರಲ್ಲ, ಅಸಹಾಯಕ ಶಾಸಕರು' ಎಂದಿರುವ ಹೆಬ್ಬಾರ್ ಈ ವೇಳೆ ತನ್ನ ನೋವನ್ನೂ ಹಂಚಿಕೊಂಡಿದ್ದಾರೆ. ಇದೇ ನಿಮ್ಮ ನಾಯಕರು ಸಿದ್ದರಾಮಯ್ಯನಾ? ಯಡಿಯೂರಪ್ಪನಾ ಎಂದಾಗ ಮಾತ್ರ ಕೊಂಚ ಗಲಿಬಿಲಿಗೊಂಡ ಶಾಸಕರು ಇಂಟರೆಸ್ಟಿಂಗ್ ಉತ್ತರವನ್ನೇ ನೀಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? ನೀವೇ ನೋಡಿ