May 13, 2019, 1:26 PM IST
ಈವರೆಗೆ ಮೈತ್ರಿಕೂಟದ ಎರಡನೇ ಹಂತದ ನಾಯಕರಿಗೆ ಸೀಮಿತವಾಗಿದ್ದ ವಾಕ್ಸಮರ, ಈಗ ಉಭಯಪಕ್ಷದ ವರಿಷ್ಠರ ನಡುವೆಯೇ ಶುರುವಾಗಿದೆ. ಸಿದ್ದರಾಮಯ್ಯ ಬಗ್ಗೆ ವಿಶ್ವನಾಥ್ ಹೇಳಿಕೆ, ಆ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಕಾಂಗ್ರೆಸ್ ಹೈಕಮಾಂಡನ್ನೇ ಚಿಂತೆಗೀಡುಮಾಡಿದೆ. ನಾಯಕದ್ವಯರ ನಡುವಿನ ಭಿನ್ನಮತ ಉಪಚುನಾವಣೆ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಾ ಎಂಬ ಬಗ್ಗೆ ಆತಂಕ ಹೈಕಮಾಂಡ್ಗೆ ಶುರುವಾಗಿದೆ.