ಚಿತ್ರದುರ್ಗದಲ್ಲಿ ಬೀಕರ ಅಪಘಾತ: ಬೆಂಗಳೂರಿನ ವಿದ್ಯಾರ್ಥಿಗಳು ಸಾವು!

Apr 22, 2019, 5:23 PM IST

ಚಿತ್ರದುರ್ಗ[ಏ.22]: ಚಿತ್ರದುರ್ಗದ JMIT ವೃತ್ತದ ಬಳಿ ಟಿಟಿ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂರು ಮಂದಿ ಸಾವನ್ನಪ್ಪಿದ್ದಾರೆ. ಟಯರ್ ಸ್ಫೋಟಗೊಂಡು ಕೆಟ್ಟು ನಿಂತಿದ್ದ ಟಿಟಿ ವಾಹನಕ್ಕೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಟಿಟಿ ವಾಹನದೊಳಗಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 6 ಜನರಿಗೆ ಗಾಯಗಳಾಗಿವೆ.  ಮೃತರನ್ನು ಬೆಂಗಳೂರು ಮೂಲದ ಕಾರ್ತಿಕ್ ಗೌಡ್(20), ಹರ್ಷ((20), ಹಾಗೂ ಶ್ರೀನಿಧಿ(20) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ವಿಜಯ ಕಾಲೇಜಿನ ಅಂತಿಮ ವರ್ಷದ ಕಾಮರ್ಸ್ ವಿದ್ಯಾರ್ಥಿಗಳಾಗಿದ್ದಾರೆ. ಬೆಂಗಳೂರಿನ ಬಸವನಗುಡಿಯ ವಿಜಯ ಕಾಲೇಜಿನ ವಿದ್ಯಾರ್ಥಿಗಳು ಎಪ್ರಿಲ್ 19 ರಂದು 13 ಮಂದಿ ವಿದ್ಯಾರ್ಥಿಗಳು ಟ್ರಿಪ್ ಗೆ ತೆರಳಿದ್ದರು. ಹೀಗೆ  ಗೋಕರ್ಣದಿಂದ ಬೆಂಗಳೂರಿಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.