'ಉತ್ತರ'ದ ಕೂಗಿಗೆ ಮಿಡಿದ ಹೃದಯಗಳು: ಸಹಾಯದೊಂದಿಗೆ ಪ್ರೀತಿ, ಅಭಯದ ನುಡಿ!

Aug 13, 2019, 12:30 PM IST

ಕರುನಾಡನ್ನು ತಲ್ಲಣಗೊಳಿಸಿದ್ದ ಪ್ರವಾಹದಿಂದ ಅನೇಕರು ತಮ್ಮ ಮನೆ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಜೀವ ರಕ್ಷಣೆಗಾಗಿ ಉಟ್ಟ ಉಡುಗೆಯಲ್ಲೇ ಸುರಕ್ಷಿತ ಪ್ರದೆಶಕ್ಕೆ ತೆರಳಿದ್ದಾರೆ. ವರುಣನ ಅಬ್ಬರಕ್ಕೆ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಕೈಲಾದಷ್ಟು ಸಹಾಯ ಮಾಡಲು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಅಭಿಯಾನವನ್ನು ಆರಂಭಿಸಿತ್ತು. ಪ್ರವಾಹ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸಲು ಸಾವಿರಾರು ಮಂದಿ ಸಹಾಯ ಮಾಡಿದ್ದು, ಆಹಾರ, ಮೆಡಿಸಿನ್, ಬಟ್ಟೆ, ಹೊದಿಕೆ ನೀಡಿ ಭಯಬೇಡ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ನೊಂದವರಿಗಾಗಿ ಮಿಡಿದ ಸಹೃದಯಿಗಳ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ 'ಸುವರ್ಣ' ನುಡಿಗಳು