Sep 3, 2019, 3:41 PM IST
ನವದೆಹಲಿ, (ಸೆ. 3): 8.6 ಕೋಟಿ ಅಕ್ರಮ ಹಣ ಸಿಕ್ಕ ಪ್ರಕರಣದಲ್ಲಿ ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಇಡಿ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದಾರೆ. ಆದ್ರೆ ಇತ್ತ ರಾಜ್ಯದ ಕಾಂಗ್ರೆಸ್ ನಾಯಕರು ಡಿಕೆಶಿ ಬೆಂಬಲಕ್ಕೆ ಯಾವೊಬ್ಬ ನಾಯಕರು ನಿಂತಿಲ್ಲ ಎನ್ನುವ ಮಾತುಗಳು ರಾಜ್ಯದಲ್ಲಿ ಕೇಳಿಬರುತ್ತಿವೆ. ಇದರ ಮಧ್ಯೆ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಸೇರಿದಂತೆ ಕೆಲ ನಾಯಕರು ದೆಹಲಿಗೆ ಹಾರಿದ್ದಾರೆ. ಇದೀಗ ಮತ್ತಷ್ಟು ರಾಜ್ಯ ಕಾಂಗ್ರೆಸ್ ನಾಯಕ ದಂಡು ದೆಹಲಿಗೆ ಹೋಗಿದೆ. ಇದರ ವಿಡಿಯೋ ಇಲ್ಲಿದೆ ನೋಡಿ.