ಗೌಡರು ಹಾಗೆ ಹೇಳ್ಬಾರ್ದಿತ್ತು: ದೇವೇಗೌಡರ ವಿರುದ್ಧ ಗುಂಡೂರಾವ್ ಕಿಡಿ!

Aug 23, 2019, 9:42 PM IST

ಬೆಂಗಳೂರು(ಆ.23): ಹೆಚ್.ಡಿ. ದೇವೇಗೌಡರ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸುಮ್ಮನೆ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ. ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ದೇವೇಗೌಡರ ಹೇಳಿಕೆ ಖಂಡನೀಯ ಎಂದಿರುವ ಗುಂಡೂರಾವ್, ಸಿದ್ದರಾಮಯ್ಯ ಅನಿವಾರ್ಯವಾಗಿ ತಿರುಗೇಟು ನೀಡಬೇಕಾಯಿತು ಎಂದು ಸಮಜಾಯಿಷಿ ನೀಡಿದ್ದಾರೆ. ರಾಜಕಾರಣದಲ್ಲಿ ಕಷ್ಟ ಸುಖ ಎಲ್ಲ ಸಾಮಾನ್ಯವಾಗಿದ್ದು, ನಮ್ಮ ಪಕ್ಷವನ್ನು ನಾವು ಕಟ್ಟುತ್ತೇವೆ ಹಾಗೂ ಅವರ ಪಕ್ಷವನ್ನು ಅವರು ಕಟ್ಟಿಕೊಳ್ಳಲಿ ಎಂದು ಮಾರ್ಮಿಕವಾಗಿ ನುಡಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...