ಅತ್ತ ದೆಹಲಿಯಲ್ಲಿ ಸರ್ಕಾರ ರಚನೆ, ಇತ್ತ ಬೆಂಗಳೂರಿನಲ್ಲಿ ದೋಸ್ತಿ ಪತನ?

May 30, 2019, 2:15 PM IST

ಲೋಕಸಭಾ ಫಲಿತಾಂಶಗಳ ಬಳಿಕ ರಾಜ್ಯದಲ್ಲಿ ಮೈತ್ರಿಪಕ್ಷಗಳ ನಡುವೆ ಭಿನ್ನಮತ ತೀವ್ರ ಸ್ವರೂಪವನ್ನು ಪಡೆದಿದೆ. ನಮ್ಮನ್ನು ಸೋಲಿಸಿದವರ ಜೊತೆ ಮೈತ್ರಿ ಮುಂದುವರಿಸಬೇಕಾ ಎಂಬ ಬಗ್ಗೆ ಜೆಡಿಎಸ್ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ಸಖ್ಯವನ್ನು ತೊರೆಯುವುದು ಸೂಕ್ತ ಎಂದು ಜೆಡಿಎಸ್ ನಾಯಕರು ಪಕ್ಷದ ವರಿಷ್ಠ ದೇವೇಗೌಡರಿಗೆ ಮನವೊಲಿಸಲು ಮುಂದಾಗಿದ್ದಾರೆ.