‘ಕುಂಬ್ಳಕಾಯಿ ಕಳ್ಳ ಅಂದ್ರೆ ಇವರೇಕೆ ಹೆಗಲು ಮುಟ್ಟಿ ನೋಡ್ತಿದ್ದಾರೆ?‘

Mar 30, 2019, 7:05 PM IST

ಕೆಲ ರಾಜಕಾರಣಿಗಳು, ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರ ಮೇಲೆ ಐಟಿ ಇಲಾಖೆಯು ನಡೆಸಿರುವ ದಾಳಿಗೆ, ರಾಜ್ಯದ ಆಡಳಿತ ಪಕ್ಷಗಳು ಪ್ರತಿಕ್ರಿಯಿಸಿರುವ ರೀತಿಯನ್ನು ಬಿಜೆಪಿ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಖಂಡಿಸಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಮೈತ್ರಿಕೂಟದ ನಾಯಕರು ಹೆಗಲನ್ನೇಕೆ ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಖಾರವಾಗಿ ಕುಟುಕಿದ್ದಾರೆ.