ಮೈತ್ರಿ ಕ್ಯಾತೆ ತೆಗೆದ ಸಿದ್ದುಗೆ ‘ಕೈ’ವಾಡ ನೆನಪಿಸಿದ ದೇವೇಗೌಡ್ರು!

Jun 20, 2019, 4:11 PM IST

ಬೆಂಗಳೂರು (ಜೂ.20): ಮೈತ್ರಿಕೂಟದಲ್ಲಿ ‘ಆಲ್ ಈಸ್ ನಾಟ್ ವೆಲ್’ ಇದು ಎಲ್ಲರಿಗೂ ತಿಳಿದಿರುವ ವಿಚಾರ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಮೈತ್ರಿಯೇ ಕಾರಣ, ಮೈತ್ರಿ  ಮುಂದುವರಿದರೆ ಕಾಂಗ್ರೆಸ್‌ಗೆ ನಷ್ಟ ಎಂಬ ಸಿದ್ದರಾಮಯ್ಯ ವಿವರಣೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ತಿರುಗೇಟು ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡ್ರು, ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುವ ಕಾರಣ ಮತ್ತು ಅದರ ಹಿಂದಿದ್ದ ‘ಕೈ’ ಯಾರದ್ದು ಎಂದು ಸಿದ್ದರಾಮಯ್ಯಗೆ ನೆನಪಿಸಿದ್ದಾರೆ.

ಬುಧವಾರ ನವದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದ ಸಮನ್ವಯ ಸಮಿತಿ ಅಧ್ಯಕ್ಷ  ಸಿದ್ದರಾಮಯ್ಯ, ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಹಿನ್ನಡೆ ಸೇರಿದಂತೆ ಹಲವು ಮಹತ್ವದ ವರದಿಗಳನ್ನು ಸಿದ್ದರಾಮಯ್ಯ ನೀಡಿದ್ದು, ಮೈತ್ರಿ‘ಕಾಟ’ದ ಬಗ್ಗೆಯೂ ರಾಹುಲ್ ಗಾಂಧಿಗೆ ವಿವರಿಸಿದ್ದರು.