ನಾಯ್ಡು, ಎಚ್‌ಡಿಕೆ ಆಯ್ತು, ಮುಂದಿನ ಸರದಿ ಯಾರದ್ದು?

Jul 24, 2019, 1:49 PM IST

ಬೆಂಗಳೂರು (ಜು.24): ಕಳೆದ ವರ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ಮತ ಸಾಬೀತು ಪಡಿಸುವ ಮುನ್ನವೇ ಕೆಳಗಿಳಿದಿದ್ದರು. ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೇರಿದ್ದನ್ನು ಮಹಾಘಟಬಂಧನ್ ನಾಯಕರು ಸಂಭ್ರಮಿಸಿದ್ದರು. ಅದಾದ ಒಂದು ವರ್ಷದಲ್ಲೇ, ಒಬ್ಬೊಬ್ಬರಂತೆ ಮಹಾಘಟಬಂಧನ್ ನಾಯಕರು ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಂಡದ್ದು ಆಯ್ತು, ಈಗ ಕರ್ನಾಟಕದಲ್ಲಿ ಕುಮಾರಸ್ವಾಮಿ ಕೆಳಗಿಳಿದಿದ್ದಾರೆ. ಮುಂದಿನ ಸರದಿ ಯಾರದು?