NO: ಕಪಿಲ್ ಹೇಳಿಕೆ ಖಂಡಿಸಿ ಸುಪ್ರೀಂನಲ್ಲೇ ಕೂಗಿದ ಆರ್.ಶಂಕರ್!

Sep 26, 2019, 5:45 PM IST

ನವದೆಹಲಿ(ಸೆ.26): ಅನರ್ಹ ಶಾಸಕರ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದ್ದು, ವಿಚಾರಣೆ ಮುಗಿಯುವವರೆಗೂ ಉಪಚುನಾವಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ಇದಕ್ಕೂ ಮೊದಲು ಸುಪ್ರೀಂನಲ್ಲಿ ವಾದ ಮಂಡಿಸಿದ್ದ ಕಪಿಲ್ ಸಿಬಲ್, ಕಾಂಗ್ರೆಸ್’ನೊಂದಿಗೆ ವಿಲೀನಕ್ಕೆ ಮುಂದಾಗಿದ್ದ ಆರ್.ಶಂಕರ್ ಕಾಂಗ್ರೆಸ್’ನಿಂದಲೇ ಸಚಿವರಾಗಿದ್ದರು ಎಂದು ಹೇಳಿದರು. ಕಪಿಲ್ ಸಿಬಲ್ ಹೇಳಿಕೆಯಿಂದ ತಾಳ್ಮೆ ಕಳೆದುಕೊಂಡ ಶಂಕರ್, ಪ್ರೇಕ್ಷಕರ ಗ್ಯಾಲರಿಯಿಂದ ಮೇಲೆದ್ದು ನೋ ಎಂದು ಕೂಗಿದರು.  ತಕ್ಷಣ ಜಾರಕಿಹೋಳಿ ಆಪ್ತ ಭರತ್ ಶಂಕರ್ ಅವರನ್ನು ತಡೆದು ತಾಳ್ಮೆ ಕಳೆದುಕೊಳ್ಳದಂತೆ ಮನವಿ ಮಾಡಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..