ಬಂಡಾಯ ಶಾಸಕರ ಗುಂಪಿನಿಂದ ದೂರ ಸರಿದ ಪಕ್ಷೇತರರು?

Jul 17, 2019, 6:30 PM IST

ಬೆಂಗಳೂರು (ಜು.17): ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿದ್ದ ಬಂಡಾಯ ಶಾಸಕರ ಜೊತೆ ಸೇರಿಕೊಂಡಿದ್ದ ಪಕ್ಷೇತರ ಶಾಸಕರು ಆ ಗುಂಪಿನಿಂದ ದೂರವಾಗಿದ್ದಾರೆ. ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಸೂಚಿಸಿರುವ ಆರ್. ಶಂಕರ್ ಮತ್ತು ಎಚ್. ನಾಗೇಶ್, ಗುರುವಾರ ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಅವರಿಬ್ಬರು ಇಂದು ತಮ್ಮ ವಾಸ್ತವ್ಯದ ಲೊಕೇಶನ್ ಬದಲಾಯಿಸಿದ್ದಾರೆ.