ಪೇಜಾವರ ಶ್ರೀಗಳು ಇಲ್ಲದ ಪರ್ಯಾಯ ಮಹೋತ್ಸವ: 70 ವರ್ಷದಲ್ಲಿ ಇದೇ ಮೊದಲು

Jan 19, 2020, 7:12 PM IST

ಉಡುಪಿ, [ಜ.19]: ಉಡುಪಿ ಅಂದ ತಕ್ಷಣ ನಮಗೆ ಅಷ್ಟ ಮಠಗಳು ನೆನಪಾಗುತ್ತೆ. ಮಠಗಳು ನೆನಪಾದ ಕೂಡಲೇ ನಮ್ಮ ಕಣ್ಮುಂದೆ ಬರೋದು ಸಂತಶ್ರೇಷ್ಟ ಶ್ರೀ ಪೇಜಾವರ ವಿಶ್ವೇಶ ತೀರ್ಥರು.. ಕಾವಿ ಬಟ್ಟೆ ತೊಟ್ಟು ಸಮಾಜಮುಖಿ ಬದುಕನ್ನ ಬದುಕಿದ ವೀರ ಸನ್ಯಾಸಿ ಅವರು.

ಉಡುಪಿ ಪರ್ಯಾಯ ಸಂಭ್ರಮ: ಭಕ್ತಿಯಲ್ಲಿ ಮಿಂದೆದ್ದ ನಗರ

ಆದ್ರೆ ಈ ವರ್ಷ ಉಡುಪಿಯಲ್ಲಿ ನಡೀತೀರೋ ಪರ್ಯಾಯ  ಮಹೋತ್ಸವದಲ್ಲಿ ಶ್ರೀಗಳಿಲ್ಲ. ಸುದೀರ್ಘ ಕಾಲ ಪರ್ಯಾಯ ಪಂಕ್ತಿಯಲ್ಲಿ ಅಸೀನರಾಗಿರ್ತಾ ಇದ್ದ ಶ್ರೀಗಳನ್ನ ಭಕ್ತಕೋಟಿ ನೆನಪು ಮಾಡಿಕೊಂಡಿತಷ್ಟೆ.. ಪೇಜಾವರ ಶ್ರೀಗಳು ಇಲ್ಲದ ಪರ್ಯಾಯ ಮಹೋತ್ಸವ ಹೇಗಾಯ್ತು ಅನ್ನೋದನ್ನ ನೋಡೋಣ ಬನ್ನಿ.