ಕರಾವಳಿಯ ದೈವನರ್ತಕರಿಗೆ ಲಾಕ್‌ಡೌನ್ ಸಂಕಟ!

May 10, 2020, 8:53 PM IST

ಉಡುಪಿ (ಮೇ.10): ಲಾಕ್‌ಡೌನ್ ಸಂಕಟ ದೈವ-ದೇವರಿಗೂ ತಟ್ಟಿದೆ. ದೈವಗಳ ನಾಡು ಕರಾವಳಿ ಜಿಲ್ಲೆ ಉಡುಪಿಯಲ್ಲಿ ದೈವಾರಾಧನೆಯು ಸಂಪೂರ್ಣ ಸ್ಥಗಿತಗೊಂಡಿದೆ. ದೈವಗಳನ್ನು ಮೈಮೇಲೆ ಆವಾಹಿಸಿಕೊಂಡು ಅನಾದಿಕಾಲದಿಂದ ಅಭಯ ನೀಡುತ್ತಾ ಬಂದಿರುವ ದೈವ ಪಾತ್ರಿಗಳು ಸಂಕಷ್ಟದಲ್ಲಿದ್ದಾರೆ.

ಇದನ್ನೂ ನೋಡಿ | ಲಾಕ್‌ಡೌನ್‌ನಿಂದ ಸೊರಗಿರುವ ಆರ್ಥಿಕತೆ: ಜೀವ ತುಂಬಲು ಹೊಸ ಸಾಹಸಕ್ಕೆ ರೈತರು ಕೈ

ಇದು ನೇಮೋತ್ಸವಗಳು ನಡೆಯುವ ಆರಾಧನಾ ಸಮಯ. ಉತ್ಸವದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದೈವ ನರ್ತಕರು ಈಗ ಕಂಗಾಲಾಗಿದ್ದಾರೆ. ದೈವನರ್ತಕರ ನಿತ್ಯ ಸಂಕಟದ ಕುರಿತು ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.