'ಅವರವರ ಮನೆಯಲ್ಲಿ ನಾಗರ ಪಂಚಮಿ ಮಾಡಲು ಅಡ್ಡಿಯಿಲ್ಲ; ಉಡುಪಿ ಡಿಸಿ

Jul 24, 2020, 4:33 PM IST

ಉಡುಪಿ (ಜು. 24): ನಾಗರಪಂಚಮಿಯಂದು ಪೂಜೆ ಮಾಡಬಾರದೆಂದು ಎಲ್ಲಿಯೂ ಹೇಳಿಲ್ಲ. ತಪ್ಪು ಅಭಿಪ್ರಾಯದ ಮೆಸೇಜ್ ಫಾರ್ವರ್ಡ್‌ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಡುಪಿ ಡಿಸಿ ಎಚ್ಚರಿಕೆ ನೀಡಿದ್ದಾರೆ. 

ದಕ್ಷಿಣ ಕನ್ನಡ ಭಾಗದಲ್ಲಿ ನಾಗರ ಪಂಚಮಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಕೇಂದ್ರ ಸರ್ಕಾರದ ಗೈಡ್‌ಲೈನ್ ಪ್ರಕಾರ ಸಾಮೂಹಿಕವಾಗಿ ಜನ ಸೇರಿ ಪೂಜೆ ಮಾಡುವಂತಿಲ್ಲ ಅಷ್ಟೇ. ವೈಯಕ್ತಿಕವಾಗಿ ಎಲ್ಲರೂ ಮನೆಯಲ್ಲಿ ಆಚರಿಸಿ ಎಂದು ಡಿಸಿ ಜಗದೀಶ್ ಹೇಳಿದ್ದಾರೆ. 

ಪಂಚಾಂಗ: ನಾಗಾರಾಧನೆಗೆ ಇಂದು ಪ್ರಶಸ್ತ ದಿನ