Apr 21, 2020, 2:51 PM IST
ಬೆಂಗಳೂರು(ಏ.21): ದಿನಸಿ ಹಂಚುತ್ತಿದ್ದ ಆರ್ಎಸ್ಎಸ್ ಕಾರ್ಯಕರ್ತನ ಮೇಲೆ ಬೆಂಗಳೂರಿನ ಹಲಸೂರು ಗೇಟ್ ಸಬ್ ಇನ್ಸ್ಪೆಕ್ಟರ್ ರಾಜ್ಶೇಖರ್ ಹಲ್ಲೆ ಮಾಡಿದ್ದಾರೆ. ಲಾಕ್ಡೌನ್ನಿಂದ ದಿನಸಿ ಸಿಗದೆ ಕಷ್ಟಪಡುತ್ತಿರುವ ಜನರಿಗೆ ಆರ್ಎಸ್ಎಸ್ ಕಾರ್ಯಕರ್ತರು ದಿನಸಿ ಹಂಚುತ್ತಿದ್ದಾರೆ.
ಕಬ್ಬನ್ಪೇಟೆಯಿಂದ ಸಂಪಗಿರಾಮನಗರಕ್ಕೆ ತೆರಳುವ ವೇಳೆ ಸ್ವಯಂ ಸೇವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರೆ. ಪ್ರತಾಪ್ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು, ಪಾಸ್ ಇದ್ದರೂ ಹಲ್ಲೆ ನಡೆಸಲಾಗಿದೆ. ಪೊಲೀಸ್ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಗರ್ಭಿಣಿ ಮಗಳನ್ನು ನೋಡಲು ತಮಿಳುನಾಡಿನಿಂದ ಕಾವೇರಿ ನದಿಯಲ್ಲಿ ಈಜಿ ಬಂದ ತಂದೆ ನೀರುಪಾಲು..!
ಬೆಂಗಳೂರಲ್ಲಿ ಕಡುಬಡವರಿಗೆ ಆರ್ಎಸ್ಎಸ್ ಕಾರ್ಯಕರ್ತರು ದಿನಸಿ ಸಾಮಾಗ್ರಿ ವಿತರಿಸುತ್ತಿದ್ದಾರೆ. ಇದಕ್ಕೆ ಪಾಸ್ ಪಡೆದು ಬೇಕ್ ಮೂಲಕ ಸಂಚರಿಸುತ್ತಿದ್ದರೂ ಪೊಲೀಸ್ ದರ್ಪ ತೋರಿಸಿದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.