ಮೊಬೈಲ್‌ಗಳನ್ನು ರಾಶಿಹಾಕಿ ಸುಟ್ಟ ಗ್ರಾಮಸ್ಥರು! ಯಾಕಂತೀರಾ?

Dec 3, 2020, 9:49 AM IST

ಚಿತ್ರದುರ್ಗ (ಡಿ. 03): ಸರ್ಕಾರ ಮಾತೆತ್ತಿದ್ರೆ ಡಿಜಿಟಲ್ ಯುಗ ಎನ್ನುತ್ತದೆ. ಆದರೆ ಅದೆಷ್ಟೋ ಹಳ್ಳಿಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದೇ ಪರದಾಡುವ ಸ್ಥಿತಿ ಇದೆ. ಇಲ್ಲಿನ ಯರೇಹಳ್ಳಿ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಗ್ರಾಮಸ್ಥರ ಪರದಾಟ ಹೇಳತೀರದು.  ಆನ್‌ಲೈನ್ ಕ್ಲಾಸ್‌ಗೆ ನೆಟ್ವರ್ಕ್ ಸಿಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಬೇರೆ ಊರುಗಳಿಗೆ, ಸಂಬಂಧಿಕರ ಮನೆಗೆ ಹೋಗಿ ಪಾಠ ಕೇಳುತ್ತಿದ್ದಾರೆ. 

ಪ್ರಥಮ ಫಲ ಬಿಟ್ಟಿರುವ ಕಲ್ಪವೃಕ್ಷಕ್ಕೆ ಸೀಮಂತ ಭಾಗ್ಯ; ವಿಜಯಪುರದಲ್ಲಿ ವಿಶೇಷ ಆಚರಣೆ

ಮೊಬೈಲ್‌ಗಳನ್ನು ರಾಶಿ ಹಾಕಿ ಬೆಂಕಿ ಕೊಟ್ಟು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನೆಟ್ವರ್ಕ್ ಟವರ್ ಹಾಕಿಸುವಂತೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ.