Video: ಶಿವ.. ಶಿವ...ರೇವಣ್ಣನ ಬಾಯಲ್ಲಿ ಇದೆಂಥಾ ಮಾತಣ್ಣ

Sep 14, 2019, 3:06 PM IST

ಹಾಸನ, (ಸೆ.14):  ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಇಂದು (ಶನಿವಾರ) ಭೇಟಿ ನೀಡಿದ್ದರು. ಈ ವೇಳೆ ರೈತರಿಗೆ ಟಾರ್ಪಲ್ ವಿತರಣೆ ಸಹ ಮಾಡಿದರು. ಆದ್ರೆ ಸರಿಯಾಗಿ ಟಾರ್ಪಲ್ ನೀಡುತ್ತಿಲ್ಲ ಎಂದು ರೈತನ ಆಕ್ಷೇಪ ವ್ಯಕ್ತಪಡಿಸಿದರು.  ಇದರಿಂದ ರೇವಣ್ಣ ಅವರು ಅಧಿಕಾರಿಗಳಿಗೆ ಕ್ಲಾಸ್ ತಗೊಂಡಿದ್ದಾರೆ. ಅಷ್ಟೇ ಅಲ್ಲದೇ  ರೈತರ ಆಕ್ಷೇಪಕ್ಕೆ ರೇವಣ್ಣ ಗರಂ ಆಗಿರುವುದು ಕಂಡುಬಂದಿದೆ. ರೇವಣ್ಣ ಆಕ್ರೋಶದ ಮಾತುಗಳು ಹೇಗಿದ್ದವು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.