ದಾಳಿಂಬೆ ಬೆಳೆದ ರೈತರಿಗೆ ಬೇವು ತಿನ್ನಿಸಿದ ಕೃಷ್ಣಾ!

Aug 7, 2019, 4:00 PM IST

ರಾಯಚೂರು (ಆ.07): ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಬೆಂಬಿಡದೇ ಸುರಿಯುತ್ತಿರುವ ಮಳೆಗೆ ಜಲಾಶಯಗಳು ಭರ್ತಿಯಾಗಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ.  ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ಕಡೆ ಸಾಲ-ಸೋಲ ಮಾಡಿ ಕೃಷಿ ಮಾಡಿದ ರೈತರಿಗೆ ಅತಿವೃಷ್ಠಿಯು ಸಂಕಟವನ್ನು ಮತ್ತಷ್ಟು  ಹೆಚ್ಚಿಸಿದೆ. ಪ್ರವಾಹ ನೀರು ದಾಳಿಂಬೆ ತೋಟಗಳಿಗೆ ನುಗ್ಗಿದ್ದು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ.