ಕೊರೋನಾ ವಾರಿಯರ್ ಮೃತದೇಹ ಅನಾಥ..!

Aug 1, 2020, 2:46 PM IST

ಗೋಕಾಕ್(ಆ.01): ಕೊರೋನಾ ಸೋಂಕಿನಿಂದ ಮೃತಪಟ್ಟ ಕೊರೋನಾ ವಾರಿಯರ್ ಮೃತದೇಹವನ್ನು ಆಸ್ಪತ್ರೆಯಿಂದ ಹೊರಗಿಟ್ಟು ನಿರ್ಲಕ್ಷ್ಯ ತೋರಿದ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ನಡೆದಿದೆ.

ಮೂಡಲಗಿ ಪುರಸಭೆಯ ಸಿಬ್ಬಂದಿ ಕೊರೋನಾಗೆ ಬಲಿಯಾಗಿದ್ದರು. ಬೆಳಗ್ಗೆ ಎಂಟುಗಂಟೆಗೆ ಮೃತಪಟ್ಟಿದ್ದರು. ಆದರೆ ಮಧ್ಯಾಹ್ನ 12 ಗಂಟೆಯಾದರೂ ಸೂಕ್ತ ವಿಲೇವಾರಿ ಮಾಡಿಲ್ಲ. ಸುಮಾರು 5 ತಾಸುಗಳ ಕಾಲ ಮೃತದೇಹವನ್ನು ಹೊರಗಿಟ್ಟು ನಿರ್ಲಕ್ಷ್ಯ ತೋರಿದ್ದಾರೆ.

                                
ಮೃತದೇಹವನ್ನು ಆಸ್ಪತ್ರೆಯ ಹೊರಗಿಟ್ಟ ಸಿಬ್ಬಂದಿಯ ವಿರುದ್ಧ ಸ್ಥಳೀಯರು ಹಾಗೂ ಕುಟುಂಬಸ್ಥರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.