ಕೃಷ್ಣ ಭಕ್ತರಿಗೆ ಎಣ್ಣೆ ಪ್ರಿಯರ ಕಾಟ; ಉಡುಪಿ ರಥಬೀದಿಯಲ್ಲಿ ಕುಡುಕರದ್ದೇ ದೊಂಬರಾಟ!

May 6, 2020, 4:25 PM IST

ಬೆಂಗಳೂರು (ಮೇ. 06): ಯಾವಾಗಲೂ ಭಕ್ತರಿಂದ ತುಂಬಿ ತುಳುಕುತ್ತಿದ್ದ ಉಡುಪಿಯ ರಥಬೀದಿ ಈಗ ಕುಡುಕರಿಂದ ತುಂಬಿ ತುಳುಕುತ್ತಿದೆ. ಎರಡು ದಿನಗಳಿಂದ ಕುಡುಕರ ಕಾಟ ಬೇಸತ್ತಿದ್ದಾರೆ ಅಲ್ಲಿನ ಜನ. ಕುಡಿದು ಕಂಡ ಕಂಡಲ್ಲಿ ಕುಡುಕರು ಬಿದ್ದಿದ್ದಾರೆ. ಇವರನ್ನು ಕಂಟ್ರೋಲ್ ಮಾಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ವೈನ್ ಶಾಪ್ ಓಪನ್‌ಗೆ ಅನುಮತಿ ಕೊಟ್ಟಿದ್ದೇ ಕೊಟ್ಟಿದ್ದು, ಕುಡುಕರು ಕಂಠಪೂರ್ತಿ ಕುಡಿದು ಕಂಡ ಕಂಡಲ್ಲಿ ಬೀಳುತ್ತಿದ್ದಾರೆ. 

ಗ್ರೀನ್‌ಝೋನ್‌: ಕಾಫಿನಾಡಿಗರು ಎಚ್ಚರ ತಪ್ಪುತ್ತಿದ್ದಾರಾ?