ಉಡುಪಿ;  ಸಂಕ್ರಾಂತಿ ಪೂಜೆ ವೇಳೆ ನಾಗರಾಜ ಪ್ರತ್ಯಕ್ಷ; ವಿಡಿಯೋ

Jan 15, 2021, 7:28 PM IST

ಉಡುಪಿ(ಜ. 15)  ಸಂಕ್ರಮಣ ವಿಶೇಷ ಪೂಜೆ ವೇಳೆ ಗೋಚರಿಸಿದ ಸರ್ಪ ಅಚ್ಚರಿ ಮೂಡಿಸಿದೆ. ಪುರಾಣ ಪ್ರಸಿದ್ಧ ಬಾರಕೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸರ್ಪ ದರ್ಶನ ನೀಡಿದೆ ಗುರುವಾರ ರಾತ್ರಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ ಸುತ್ತು ಬಲಿ ಸಂದರ್ಭದಲ್ಲಿ ಸರ್ಪ ದರ್ಶನ ನೀಡಿದೆ.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ

ಶ್ರೀ ಕುಮಾರ ಸ್ವಾಮಿ ಮೂರ್ತಿಯ ಮೇಲೆ ಹರಿದಾಡಿದ ಸರ್ಪ ಕಂಡು ಭಕ್ತ ಸಮೂಹ ಪುಳಕಿತವಾಗಿದೆ.  ಸಾಕ್ಷಾತ್ ನಾಗರಾಜನೇ ದರ್ಶನ ನೀಡಿದ್ದಾನೆ ಎಂದು ಭಕ್ತರು ನಮಸ್ಕರಿಸಿದ್ದಾರೆ.