Karnataka Politics: ನಾವ್ಯಾರೂ ಪಕ್ಷ ಬಿಡೋದಿಲ್ಲ: ವಲಸಿಗ ಶಾಸಕರ ಅಳಲು

Jan 28, 2022, 12:52 PM IST

ಬೆಂಗಳೂರು(ಜ.28):  ನಮ್ಮನ್ನ ದಯವಿಟ್ಟು ವಲಸಿಗರು ಅಂತ ಕರೆಯಬೇಡಿ ಅಂತ ವಲಸಿಗ ಶಾಸಕರು ಸಿಎಂ ಸಭೆಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಬಿಜೆಪಿ ಪಕ್ಷದಲ್ಲೇ ಕೆಲವು ನಮ್ಮನ್ನು ವಲಸಿಗರು ಅಂತಾರೆ. ಪಕ್ಷ ತೊರೆದು ಬಿಜೆಪಿಗೆ ಬಂದಿದ್ದಕ್ಕೆ ಸರ್ಕಾರ ರಚನೆಯಾಗಿದೆ. ಆದರೂ ನಮ್ಮನ್ನ ವಲಸಿಗರು ಅಂತ ಕರೀತಾರೆ. ಮಾಧ್ಯಮಗಳು ಅನ್ನಲಿ ಆದರೆ ಪಕ್ಷದೊಳಗಿನವರೇ ಅಂದ್ರೆ ಹೇಗೆ ಅಂತ ವಲಸಿಗ ಶಾಸಕರು ಪ್ರಶ್ನಿಸುತ್ತಿದ್ದಾರೆ. ಕಣ್ಣಲ್ಲಿ ನೀರು ತುಂಬಿಕೊಂಡು ವಲಸಿಗ ಶಾಸಕರು ಸಿಎಂ ಬಸವರಾಜ ಬೊಮ್ಮಾಯಿ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಮ್ಮನ್ನ ವಲಸಿಗರು ಅಂತ ಕರೆಯೋದನ್ನ ದಯವಿಟ್ಟು ನಿಲ್ಲಿಸಿ, ನಾವ್ಯಾರು ಪಕ್ಷ ಬಿಡಲ್ಲ ಎಂದು ಸಿಎಂಗೆ ಮನವರಿಕೆ ಮಾಡಿದ್ದಾರೆ.

ಆರ್ಥಿಕ ಸಂಕಷ್ಟ: ಸಾಲದ ಸುಳಿಯಲ್ಲಿ ಸಿಲುಕಿ KSRTC ಒದ್ದಾಟ