Jun 6, 2020, 3:17 PM IST
ಬೆಂಗಳೂರು(ಜೂ.06): ಅಂಗಡಿಗಳನ್ನ ತೆರೆಯಲು ಪರವಾನಿಗೆ ನೀಡಬೇಕು ಎಂದು ಒತ್ತಾಯಿಸಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದ ಘಟನೆ ನಗರದ ಕೆ. ಆರ್. ಮಾರ್ಕೆಟ್ನಲ್ಲಿ ಇಂದು(ಶನಿವಾರ) ನಡೆದಿದೆ. ಇಷ್ಟು ದಿನ ಅಂಗಡಿಗಳನ್ನ ಬಂದ್ ಮಾಡಿದ್ದರಿಂದ ಸಾಕಷ್ಟು ನಷ್ಟವುಂಟಾಗಿದೆ. ಹೀಗಾಗಿ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಿ ಎಂದು ಹಸಿರು ಹೊತ್ತುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ನಮ್ಮ ಶಾಲೆಯಿಂದ ಯಾವುದೇ ಮಾಸ್ಕ್ ವಿತರಿಸುತ್ತಿಲ್ಲ: ಡೆಲ್ಲಿ ಪಬ್ಲಿಕ್ ಸ್ಕೂಲ್ ಸ್ಪಷ್ಟನೆ
ಲಾಕ್ಡೌನ್ ಘೋಷಣೆಯಾಗಿದ್ದರಿಂದ ವ್ಯಾಪಾರಿಗಳು ಬಹಳಷ್ಟು ಕಷ್ಟ ನಷ್ಟಗಳನ್ನ ಅನುಭವಿಸಿದ್ದಾರೆ. ಹೀಗಾಗಿ ಇದೀಗ ಲಾಕ್ಡೌನ್ ಸಡಿಲವಾಗಿದ್ದರಿಂದ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಿ ಎಂದು ನೂರಾರು ಸಂಖ್ಯೆಯಲ್ಲಿ ಸೇರಿದ ಅಂಗಡಿಕಾರರು ಪ್ರತಿಭಟನೆ ನಡೆಸಿದ್ದಾರೆ.