ಲಖೀಂಪುರ ಹಿಂಸಾಚಾರ: ರೈತರ ಮೇಲೆ ಕಾರು ಹತ್ತಿಸಿದ್ದ ಭಯಾನಕ ದೃಶ್ಯ ಸೆರೆ!

Oct 5, 2021, 11:08 AM IST

ಲಖೀಂಪುರ(ಅ.05) ಉತ್ತರ ಪ್ರದೇಶದ ಲಖೀಂಪುರ ಹಿಂಸಾಚಾರ ಪ್ರಕರಣ ಸಂಬಂಧ, ರೈತರ ಮೇಲೆ ಕಾರು ಹತ್ತಿಸಿದ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು ಕೇಂದ್ರ ಸಚಿವರ ಬೆಂಗಾವಲು ಕಾರಿನಿಂದ ಡಿಕ್ಕಿ ಹೊಡೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೂ ಭಾರೀ ವೈರಲ್ ಆಗಿದೆ.

ಲಖೀಂಪುರದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಹಾಗೂ ನಾಲ್ವರು ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಕೆಂದ್ರ ಸಚಿವರ ಪುತ್ರ ಸೇರಿ ಹದಿನಾಲ್ಕು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.