UP Elections: ಯೋಗಿ ಆದಿತ್ಯನಾಥ್‌ಗೆ ಪ್ಲಸ್‌ ಪಾಯಿಂಟ್‌ ಆಗುವ ವಿಚಾರಗಳಿವು

Feb 25, 2022, 4:56 PM IST

ಲಕ್ನೋ (ಫೆ. 25):  ಉತ್ತರ ಪ್ರದೇಶದಲ್ಲಿ (UP Election) 4 ನೇ ಹಂತದ ಮತದಾನ ನಡೆದಿದೆ. ಯೋಗಿ- ಅಖಿಲೇಶ್ ಮಡುವೆ ದೊಡ್ಡ ಮಟ್ಟದ ಪೈಪೋಟಿ ಇದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಉಚಿತ ಪಡಿತರ, ಸುರಕ್ಷಾ ಸಮ್ಮಾನ್, ಮುಸಲ್ಮಾನ ವಿಚಾರ ಮಹತ್ವದ ಪಾತ್ರ ವಹಿಸಿದೆ. 

UP Election: ಚುನಾವಣಾ ಅಖಾಡದಲ್ಲಿ ವರುಣ್ ಗಾಂಧಿ ಕಾಣಿಸುತ್ತಿಲ್ಲ ಯಾಕೆ..?

ಬಿಜೆಪಿಗೆ ಪರಂಪರಾಗತವಾಗಿ ಮತ ನೀಡದ ಸಮುದಾಯಗಳು ಕೂಡಾ ಈ ಬಾರಿ ಯೋಗಿ ಬಗ್ಗೆ ಒಲವು ತೋರಿದಂತೆ ಕಾಣಿಸುತ್ತಿದೆ. ಕಳೆದ 5 ವರ್ಷಗಳಲ್ಲಿ ಕಾನೂನು ಸುವ್ಯವಸ್ಥೆ ಗಣನೀಯವಾಗಿ ಸುಧಾರಿಸಿದೆ ಎಂದು ಜನರು ಹೇಳುತ್ತಿದ್ದಾರೆ. ಈ ವಿಚಾರವಾಗಿ ಅಖಿಲೇಶ್ ಯಾದವ್, ಯೋಗಿ ಕಾರ್ಯವೈಖರಿ ಮೇಲೆ ಹರಿಹಾಯ್ದರೂ, ಜನ ತಲೆಕೆಡಿಸಿಕೊಳ್ಳುತ್ತಿಲ್ಲ.