ಭಾರತದ ಮೇಲೆ ಉಗ್ರರ ಕೆಂಗಣ್ಣು: ಐಸಿಸ್‌-ಕೆಯ 14 ಕೇರಳಿಗರು ತಾಯ್ನಾಡಿಗೆ!

Aug 30, 2021, 4:20 PM IST

ಕಾಬೂಲ್(ಆ.30) ಕಾಬೂಲ್‌ನಲ್ಲಿ ರಕ್ತ ಕುಡಿದರವ ಮುಂದಿನ ಟಾರ್ಗೆಟ್‌ ಭಾರತ. ಪಾಪಿಗಳ ಜೊತೆ ಪಳಗಿದವರು ಹಿಂದೂಸ್ತಾನಕ್ಕೂ ಕಾಲಿಡ್ತಾರಂತೆ. ಐಸಿಸ್‌ ಕೆ ಗುಂಪಿನ 14 ಕೇರಳಿಗರು ತಾಯ್ನಾಡಿಗೆ ಬರುತ್ತಾ ಇರೋದೇಕೆ? ಕೇರಳದಲ್ಲಿ ಐಸಿಸ್ ಹುತ್ತ ಹೆಡೆ ಎತ್ತುತ್ತಿರುವ ವಿಷಸರ್ಪಗಳು.

ಹೌದು ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಹೆಚ್ಚಾದ ಬಳಿಕ, ಜಗತ್ತಿನಾದ್ಯಂತ ಮತ್ತೊಮ್ಮೆ ಭಯೋತ್ಪಾದನೆಯ ಭಯ ಆವರಿಸಿಕೊಳ್ಳುತ್ತಿದೆ. ಐರೋಪ್ಯ ರಾಷ್ಟ್ರಗಳು ಸೇರಿದಂತೆ ಪ್ರಪಂಚದ ಮೂಲೆ ಮೂಲೆಯಲ್ಲಿ ಉಗ್ರರ ಕರಾಳ ಕಾರ್ಮೋಡ ಸೃಷ್ಟಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶಾಂತಿಯ ನಾಡು ಭಾರತದ ಮೇಲೆ ಉಗ್ರರ ಕೆಂಗಣ್ಣು ಬಿದ್ದಿದೆ. ಈ ಕುರಿತಾದ ಒಂದು ವರದಿ