Jun 10, 2021, 5:16 PM IST
ನವದೆಹಲಿ(ಜೂ.10): ಕೊರೋನಾ ಕಾಲದಲ್ಲಿ ಅನೇಕ ಬಗೆಯ ಘಟನೆಗಳು ನಡೆಯುತ್ತಿವೆ. ಕೆಲವರು ಸಂಕಷ್ಟಕ್ಕೀಡಾದವರ ಕಷ್ಟಕ್ಕೆ ಸ್ಪಂದಿಸಿದರೆ, ಇನ್ನು ಕೆಲವರದ್ದು ತಮ್ಮವವರನ್ನು ಕಳೆದುಕೊಂಡ ನೋವು, ಮತ್ತೆ ಕೆಲವರು ಬದುಕಿ ಕಟ್ಟಿಕೊಳ್ಳಲು ಹರಸಾಹಸ ಪಟ್ಟುಕೊಳ್ಳುವುದು ಹೀಗೆ ನಾನಾ ಬಗೆಯ ಮನಮಿಡಿಯುವ ಘಟನೆಗಳು ನಡೆಯುತ್ತವೆ.
ಮೋದಿಗೆ ಗಡ್ಡ ಬೋಳಿಸಲು 100 ರೂ. ಕಳುಹಿಸಿದ 'ಚಾಯ್ವಾಲಾ', ಜೊತೆಗೊಂದು ಪತ್ರ!
ಸದ್ಯ ಕೊರೋನಾ ಎರಡನೇ ಅಲೆ ದೇಶದಲ್ಲಿ ತಗ್ಗಿದಂತೆ ಭಾಸವಾಗುತ್ತಿದೆ. ಆದ್ದರಿಂದ ಲಾಕ್ಡೌನ್ ವಿಧಿಸಿದ್ದ ರಾಜ್ಯಗಳು ನಿಧಾನವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭಿಸುತ್ತಿವೆ. ದೆಹಲಿ, ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ರಾಜ್ಯಗಳು ಕೊರೋನಾ ನಿಯಮ ಸಡಿಲೊಳಿಸುತ್ತಿವೆ. ಆದರೀಗ ಈ ಖುಷಿ ವಿಚಾರದ ನಡುವೆಯೇ ಹೊಸ ಅಪಾಯಕಾರಿ ತಳಿಯೊಂದು ಪತ್ತೆಯಾಗಿದ್ದು ಮತ್ತಷ್ಟು ಆತಂಕ ಸೃಷ್ಟಿಸಿದೆ.