Aug 15, 2021, 10:52 AM IST
ನವದೆಹಲಿ (ಆ. 15): ರಾಷ್ಟ್ರ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಇಡೀ ದೇಶ ಇಂದು ಸಡಗರ ಸಂಭ್ರಮದಿಂದ ಆಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
Independence Day: ತನ್ನ ಗುರಿ ಸಾಧಿಸುವುದರಿಂದ ಭಾರತವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ: ಮೋದಿ!
'ಆದಿವಾಸಿಗಳ ಜಿಲ್ಲೆಗಳಲ್ಲಿ ಅಬಿವೃದ್ಧಿಯ ಯುಗ ಆರಂಭಗೊಳ್ಳುತ್ತಿದೆ. ಗ್ರಾಮೀಣ ಭಾಗಗಳು ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದನ್ನು ಗಮನಿಸಿದ್ದೀರಿ. ಪ್ರತಿ ಹಳ್ಳಿಗಳಲ್ಲೂ ಇಂಟರ್ನೆಟ್ ಸೌಲಭ್ಯ ತಲುಪಿದೆ. ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ. ಕೊರೊನಾ ಬಳಿಕ ಟೆಕ್ನಾಲಜಿಯ ತಾಕತ್ತನ್ನು ನಾವು ನೋಡಿದ್ದೇವೆ' ಎಂದು ಪ್ರಧಾನಿ ಮೋದಿ ಟೆಕ್ನಾಲಜಿ ಹಾಗೂ ಗ್ರಾಮೀಣ ಭಾರತದ ಅಭಿವೃದ್ದಿಗೆ ಒತ್ತು ಕೊಡುವ ಮಾತುಗಳಾನ್ನಾಡಿದ್ದಾರೆ.