ಸನ್ಯಾಸಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಸಾಧುಗಳ ಶ್ರೀರಕ್ಷೆ

Feb 24, 2022, 5:44 PM IST

ಉತ್ತರಪ್ರದೇಶದಲ್ಲಿ ನಾಲ್ಕು ಹಂತದ ಮತದಾನ ಈಗಾಗಲೇ ಮುಗಿದಿದ್ದು, ಇನ್ನು ಮೂರು ಹಂತಗಳ ಮತದಾನ ಬಾಕಿ ಉಳಿದಿದೆ. ಇದು ಬಿಜೆಪಿಗೆ ಅತ್ಯಂತ ಮಹತ್ವದ ಹಂತಗಳಾಗಿವೆ. ಇದರ ಜೊತೆಗೆ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಅಯೋಧ್ಯೆಯ ಸಾಧು ಸಂತರು ಬೆಂಬಲ ಘೋಷಿಸಿದ್ದು, ಚುನಾವಣೆಯ ಅಖಾಡಕಿಳಿದಿದ್ದಾರೆ. ಈ ಸಾಧು ಸಂತರು ಮಠ ಮಂದಿರಗಳನ್ನು ಬಿಟ್ಟು ಹೊರಗಡೆ ಬಂದು ಬಿಜೆಪಿ ಹಾಗೂ ಯೋಗಿ ಆದಿತ್ಯನಾಥ್‌ ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ರಾಷ್ಟ್ರವಾದಿ ಸರ್ಕಾರ ತರುವ ಸಂಕಲ್ಪ ಮಾಡಿದ್ದು, ಇದಕ್ಕಾಗಿ ಯೋಗಿ ಆದಿತ್ಯನಾಥ್‌ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿಸಲು ನಾವು ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೇವೆ ಎಂದು ಈ ಸಾಧುಗಳು ಹೇಳಿದ್ದಾರೆ.