ಸಾಯುವ ವಯಸ್ಸಲ್ಲಿ ಹೊಂದಾಣಿಕೆ ಬೇಕಿತ್ತಾ? ಕಾಂಗ್ರೆಸ್ ನಾಯಕ ರಾಜಣ್ಣ ವಿವಾದ!

Apr 6, 2024, 10:45 PM IST

ಲೋಕಸಭಾ ಚುನಾವಣೆ ಕಣ ರಂಗೇರುತ್ತಿದೆ. ಇದರೊಂದಿಗೆ ನಾಯಕರ ವಾಕ್ಸಮರ ಕೂಡ ಜೋರಾಗುತ್ತಿದೆ. ಇದೀಗ ಕಾಂಗ್ರೆಸ್ ನಾಯಕ ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇವೇಗೌಡರಿಗೆ ಸಾಯುವ ಕಾಲದಲ್ಲಿ ಹೊಂದಾಣಿಕೆ ಬೇಕಿತ್ತಾ ಎಂದು ಪ್ರಶ್ನಿಸಿ ಟೀಕೆಗೆ ಗುರಿಯಾಗಿದ್ದಾರೆ. ಹಿರಿಯ ರಾಜಕಾರಣಿ ವಿರುದ್ಧ ನಾಲಗೆ ಹರಿಬಿಟ್ಟ ರಾಜಣ್ಣ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ರಾಜಣ್ಣ ವಿಧಾನಸೌಧದ ಮೆಟ್ಟಿಲು ಹತ್ತಿದ್ದೇ ದೇವೆಗೌಡರಿಂದ ಎಂದು ಹೆಚ್‌ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.  ರಾಜಣ್ಣಗೆ ದೊಡ್ಡಗೌಡರ ಬಗ್ಗೆ ಕೀಳಾಗಿ‌ ಮಾತಾಡೋ ಚಾಳಿ‌ ಇದೆ ಎಂದು ಆರ್​. ಅಶೋಕ್ ಕಿಡಿಕಾರಿದ್ದಾರೆ. ಲೋಕಸಭೆ ಚುನಾವಣೆ ಅಖಾಡ, ರಾಜ್ಯದಲ್ಲಿನ ಪ್ರಚಾರ, ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.