ಪೆಟ್ರೋಲ್ ಹಿಡಿದು ಬೆಂಕಿ ನಂದಿಸಲು ಬಂದ ಪಾಕಿಸ್ತಾನಕ್ಕೆ ಭಾರತ ತಿರುಗೇಟು!

Sep 26, 2021, 12:23 AM IST

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಮತ್ತೆ ಹರಾಜಾಗಿದೆ. ಭಾರತದಲ್ಲಿನ ಮುಸ್ಲಿಮರು ಭಯದಿಂದ ಬದುಕುತ್ತಿದ್ದಾರೆ ಎಂದ ಪಾಕಿಸ್ತಾನಕ್ಕೆ ಭಾರತ ತಕ್ಕ ತಿರುಗೇಟು ನೀಡಿದೆ. ಅಂಕಿ ಅಂಶ ಜೊತೆ ವಿವರಿಸಿದ ಭಾರತ, ಪಾಕಿಸ್ತಾನ ಮೊಸಳೆ ಕಣ್ಣೀರನ್ನು ಬಯಲು ಮಾಡಿದೆ. ಇದೇ ವೇಳೆ ಪಾಕಿಸ್ತಾನದ ವರಸೆ ಹೇಗಿದೆ ಎಂದರೆ ಪೆಟ್ರೋಲ್ ಹಿಡಿದು ಬೆಂಕಿ ನಂದಿಸಲು ಬಂದ ಹಾಗಿದೆ ಎಂದು ಭಾರತ ಪ್ರತಿಕ್ರಿಯೆ ನೀಡಿದೆ. ಇದರೊಂದಿಗೆ ರೈತರ ಭಾರತ್ ಬಂದ್, ಮಂಗಳೂರಿನಲ್ಲಿ ಮತಾಂತರ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.