Jun 12, 2020, 10:33 AM IST
ನವದೆಹಲಿ(ಜೂ.12): ಸ್ವಾಮಿ ಅಯ್ಯಪ್ಪನ ಮೇಲೂ ಕೊರೋನಾ ವೈರಸ್ ಕರಿನೆರಳು ಬಿದ್ದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ವರ್ಷದ ಶಬರಿಮಲೆ ಯಾತ್ರೆ ರದ್ದು ಮಾಡಲಾಗಿದೆ. ದೇವಸ್ಥಾನದ ಮಂಡಳಿಯಿಂದ ಮಹತ್ವದ ಆದೇಶ ಹೊರಡಿಸಲಾಗಿದೆ.
ಕೊರೋನಾ ಸೋಂಕು ಸಮುದಾಯದ ಹಂತ ತಲುಪಿಲ್ಲ. ಭಾರತೀಯ ವೈದ್ಯಕೀಯ ಸಂಶೋದನಾ ಸಂಸ್ಥೆ ಈ ಹೇಳಿಕೆ ನೀಡಿದೆ. ಕೋವಿಡ್ 19 ತಡೆಗಟ್ಟುವ ವಿಚಾರದಲ್ಲಿ ಲಾಕ್ಡೌನ್ ಯಶಸ್ವಿಯಾಗಿದೆ ಎಂದು ICMR ತಿಳಿಸಿದೆ.
ಕೊರೋನಾ ಸಾವಿಗೆ ಜನರ ನಿರ್ಲಕ್ಷ್ಯವೇ ಕಾರಣ: ಸಚಿವ ಸುಧಾಕರ್
ಇನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಪ್ ಸಹೋದರನಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನಷ್ಟು ಕೊರೋನಾ ಸಂಬಂಧಿತ ಸುದ್ದಿಗಳು ಇಲ್ಲಿವೆ ನೋಡಿ.