ಹಾಸನ: ವಿದ್ಯಾರ್ಥಿಗಳನ್ನು ಥಳಿಸಿದ ಪ್ರಾಂಶುಪಾಲ, ದೂರು ದಾಖಲು

Mar 20, 2019, 10:40 PM IST

ಹಾಸನ[ಮಾ. 20]  ಕಾಲೇಜು ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಪ್ರಾಂಶುಪಾಲ ಹಾಗೂ ಉಪನ್ಯಾಸಕರ ವಿರುದ್ಧ ದೂರು ದಾಖಲಾಗಿದೆ. ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್‌ನ ಟೈರ್ ಗಾಳಿ ತೆಗೆದ ವಿಷಯ ಗೊಂದಲಕ್ಕೆ ಕಾರಣವಾಗಿದೆ. ಕಾನೂನು ಪದವಿ‌ ಓದುತ್ತಿರುವ ವಿಶ್ವಾಸ್ ಮತ್ತು ಕಲಾ ಕಾಲೇಜಿನ ಬಿಎ‌ ವಿದ್ಯಾರ್ಥಿ ಮೇಲೆ ಹಲ್ಲೆಯಾಗಿದೆ. ವಿದ್ಯಾರ್ಥಿಗಳನ್ನು ಅಮಾನುಷವಾಗಿ ಥಳಿಸಿದ ಹಾಸನದ ಸರ್ಕಾರಿ ಕಲಾ ಕಾಲೇಜಿನ ಬೋಧಕರ ಮೇಲೆ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಪ್ರಾಂಶುಪಾಲ ರಾಜಪ್ಪ ಹಾಗೂ ಉಪನ್ಯಾಸಕರ ವಿರುದ್ದ ಬಡಾವಣೆ ಠಾಣೆಗೆ ದೂರು ನೀಡಲಾಗಿದೆ.