ಗಣಪತಿಗೆ ಗರಿಕೆ ಯಾಕಿಷ್ಟ? ಕೇಳೋಣ ಬನ್ನಿ ದೂರ್ವಾ ಮಹಾತ್ಮೆ..!

Sep 21, 2020, 3:04 PM IST

ಮಹಾ ಗಣಪತಿಗೆ ದೂರ್ವೆ/ಗರಿಕೆ ಶ್ರೇಷ್ಠ. ಭಕ್ತಿಯಿಂದ ಒಂದು ಕಡ್ಡಿ ದೂರ್ವೆಯನ್ನು ಇಟ್ಟರೂ ಸಾಕು, ಆ ಮಹಾಗಣಪತಿ ಪ್ರಸನ್ನನಾಗುತ್ತಾನೆ. ಒಮ್ಮೆ ಸ್ವರ್ಗಲೋಕದಲ್ಲಿ ತಕ್ಕಡಿಯ ಒಂದು ಭಾಗದಲ್ಲಿ ಕುಬೇರನ ಆಸ್ಥಾನದಲ್ಲಿರುವ ಎಲ್ಲಾ ಐಶ್ವರ್ಯಗಳನ್ನು ಇಡಲಾಯಿತು. ಆದರೆ ತಕ್ಕಡಿ ಮೇಲೆಳಲೇ ಇಲ್ಲ.

ಸಂಕಷ್ಟಹರ ಗಣಪತಿ ಸ್ತೋತ್ರವನ್ನು ಯಾಕಾಗಿ ಪಠಿಸಬೇಕು? ಇದರ ಫಲವೇನು?

ಭಕ್ತಿಯಿಂದ ಒಂದು ಕಡ್ಡಿ ಗರಿಕೆಯನ್ನು ಮೇಲಿಟ್ಟಾಗ ತಕ್ಕಡಿ ಮೇಲೆದ್ದಿತು. ಅದನ್ನು ನೋಡಿ ದೇವತೆಗಳು ಆಶ್ಚರ್ಯಚಕಿತರಾದರು. ದೇವತೆಗಳು ಕೂಡಾ ಗಣಪತಿಯ ದೂರ್ವೆಯ ಮಹಾತ್ಮೆಯನ್ನು ಯಾರು ಪಠಿಸುತ್ತಾರೋ ಅವರ ಸಕಲ ಪಾಪಗಳು ನಾಶವಾಗುತ್ತದೆ. ಹಾಗಾದರೆ ದೂರ್ವಾ ಮಹಾತ್ಮೆಯ ಕಥೆ ಏನು? ಇದನ್ನು ಪಠಿಸುವುದರಿಂದ ಏನೇನೂ ಅನುಕೂಲಗಳಾಗುತ್ತವೆ? ನೋಡೋಣ ಬನ್ನಿ..!