ವಾಸುದೇವ ಕೃಷ್ಣನ ಅಂತ್ಯ ಬೇಡನಿಂದ, ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಭಾಗವತ

Mar 6, 2021, 4:56 PM IST

ಶಾಪದಂತೆ ಜಿಂಕೆ ಎಂದು ಭಾವಿಸಿ ವಾಸುದೇವ ಕೃಷ್ಣನ ಮೇಲೆ ಬೇಡ ಬಾಣ ಪ್ರಯೋಗ ಮಾಡುತ್ತಾನೆ. ಬಾಣ ಕೃಷ್ಣನ ಕಾಲಿಗೆ ಚುಚ್ಚುತ್ತೆ. ಹತ್ತಿರ ಬಂದು ನೋಡಿದಾಗ ಬೇಡನಿಗೆ ಕೃಷ್ಣ ಎಂದು ತಿಳಿಯುತ್ತದೆ. ಪಶ್ಚಾತ್ತಾಪದಿಂದ ಬೇಡ, ಕೃಷ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಆಗ ಕೃಷ್ಣ, ಬೇಡ, ಇದರಲ್ಲಿ ನಿನ್ನದೇನೂ ತಪ್ಪಿಲ್ಲ. ಎಲ್ಲವೂ ನನ್ನ ಸಂಕಲ್ಪದಂತೆ ನಡೆದಿದೆ. ನಿನಗೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಅನುಗ್ರಹಿಸುತ್ತಾನೆ.