ಬ್ಯಾಟರಾಯನಪುರ ಕ್ಷೇತ್ರದಲ್ಲಿ ದಸರಾ ಸಡಗರ: ವಿನಯ್ ಗುರೂಜಿ ಭಾಗಿ

Oct 10, 2022, 6:18 PM IST

ವಿದ್ಯಾರಣ್ಯ ಪುರ (ಅ.10): ಶರನ್ನವರಾತ್ರಿ ಮುಗಿದ್ರೂ ನಗರದಲ್ಲಿ ಇಂದಿಗೂ ಹಬ್ಬದ ವಾತಾವರಣ ಕಳೆಗುಂದಿಲ್ಲ. ಇದಕ್ಕೆ ಉದಾಹರಣೆ , ಬ್ಯಾಟರಾಯನಪುರ ಕ್ಷೇತ್ರದಲ್ಲಿ ನಡೆದ ದಸರಾ ಉತ್ಸವ. ಹೌದು ಇಂದು ಬ್ಯಾಟರಾಯನಪುರ ಕ್ಷೇತ್ರದ  ವಿದ್ಯಾರಣ್ಯಪುರದಲ್ಲಿರೋ ಎನ್‌ಟಿಐ ಗ್ರೌಂಡ್‌ನಲ್ಲಿ ದಸರಾ ಉತ್ಸವ ಆಯೋಜಿಸಿದ್ರು. ಉತ್ಸವದಲ್ಲಿ ಸುಮಾರು 3000ಕ್ಕೂ ಅಧಿಕ ಮಹಿಳೆಯರು ತಾಯಿ ದುರ್ಗಾಪರಮೇಶ್ವರಿಗೆ ಪೂಜೆ ಸಲ್ಲಿಸಿದ್ರು. 150ಕ್ಕೂ ಹೆಚ್ಚು ಪಲ್ಲಕ್ಕಿಗಳು ಈ ಗ್ರೌಂಡ್‌ನಲ್ಲಿ ಒಂದರಪಕ್ಕದಲ್ಲೊಂದು ನಿಂತಿದ್ರೆ ನೋಡಲು 2 ಕಣ್ಣುಗಳ ಸಾಲದಾಗಿತ್ತು. ಜೊತೆಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಪಲ್ಲಕ್ಕಿ ಜೊತೆ ಕ್ಷೇತ್ರದಲ್ಲಿ 7 ಕಿ.ಮೀ ಹೆಜ್ಜೆ ಹಾಕಿದ್ರು. ಇನ್ನು ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಅವಧೂತ ವಿನಯ್ ಗುರೂಜಿ, ಬಿಜೆಪಿಯ ತಮ್ಮೇಶ್ ಗೌಡ ಸೇರಿದಂತೆ ಇನ್ನಿತರರು ಭಾಗಿಯಾಗಿದ್ರು.