'ಪುನೀತ' ಪುಣ್ಯಸ್ಮರಣೆ: ಅಪ್ಪು ನಿವಾಸಕ್ಕೆ ಗಣ್ಯರು, ಸ್ಯಾಂಡಲ್‌ವುಡ್ ನಟ-ನಟಿಯರ ಭೇಟಿ

Nov 8, 2021, 5:21 PM IST

ಬೆಂಗಳೂರು (ನ. 08): ಇಂದು ಪುನೀತ್ (Puneeth Rajkumar) 11 ನೇ ದಿನದ ಪುಣ್ಯತಿಥಿ, ಅಪ್ಪು ನಿವಾಸಕ್ಕೆ ಸ್ಯಾಂಡಲ್‌ವುಡ್ ನಟ-ನಟಿಯರು, ಗಣ್ಯರು ಆಗಮಿಸಿದ್ದಾರೆ. ನಟಿ ಶೃತಿ, ಹಂಸಲೇಝ, ಬರಗೂರು ರಾಮಚಂದ್ರಪ್ಪ, ತೇಜಸ್ವಿನಿ ಅನಂತ್‌ಕುಮಾರ್, ಅವಿನಾಶ್ ದಂಪತಿ, ದತ್ತಣ್ಣ, ಉಪೇಂದ್ರ, ಶರಣ್, ಟಾಲಿವುಡ್ ನಟ ಸಿದ್ದಾರ್ಥ್ ಸೇರಿ ಸಾಕಷ್ಟು ಮಂದಿ ಭಾಗಿಯಾದರು.

Puneeth Rajkumar: ಬೆಂಗಳೂರಿನಿಂದ ಬೆಳಗಾವಿಯವರೆಗೆ ಪುನೀತ್‌ಗಾಗಿ ಚಿತ್ರಮಂದಿರಗಳ ಕಂಬನಿ  

'ಅಪ್ಪು ಸರ್ ಕಳೆದುಕೊಂಡಿರುವುದು ಬಹಳ ನೋವಿನ ವಿಚಾರ. ಅವರೊಬ್ಬ ಪ್ರತಿಭಾನ್ವಿತ ನಟ, ಒಳ್ಳೆಯ ವ್ಯಕ್ತಿಯಾಗಿದ್ದರು. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ' ಎಂದು ಪ್ರಾರ್ಥಿಸಿದರು. ಜೊತೆಗೆ ಬಂದಿರುವ ಪ್ರತಿಯೊಬ್ಬರು ಪುನೀತ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.