ನಿಮ್ಮೊಂದಿಗೆ ನಾವಿದ್ದೇವೆ; ನೆರೆ ಸಂತ್ರಸ್ತರ ನೆರವಿಗೆ ಮುಂದಾದ ಶಿವಣ್ಣ

Aug 9, 2019, 2:03 PM IST

ವರುಣರಾಯನ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದಾರೆ ಜನ. ಪ್ರವಾಹಕ್ಕೆ ಸಿಲುಕಿರುವ ಜನರ ಸಹಾಯಕ್ಕೆ ಮುಂದಾಗಿದ್ದಾರೆ ನಟ ಶಿವರಾಜ್ ಕುಮಾರ್. ಇಡೀ ಚಿತ್ರರಂಗ ನಿಮ್ಮ ಜೊತೆಗಿದೆ ಎಂದು ಶಿವಣ್ಣ ಭರವಸೆ ನೀಡಿದ್ದಾರೆ. ನೀವು ನಮ್ಮನ್ನು ಬೆಳೆಸಿದ್ದೀರಿ.  ನಿಮ್ಮನ್ನು ನಾವು ರಕ್ಷಣೆ ಮಾಡುತ್ತೇವೆ. ನೆರೆಪೀಡಿತ ಜನರ ಸಹಾಯಕ್ಕೆ ನಾವೆಂದೂ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.